ಹೆಬ್ರಿ: ಮುನಿಯಾಲು ಸಂಜೀವಿನಿ ಗೋಧಾಮಕ್ಕೆ ನಾಗಸಾಧುಗಳ ಭೇಟಿ

ಹೆಬ್ರಿ: ಹೆಬ್ರಿ ಸಮೀಪದ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19ರಿಂದ 21ರವರೆಗೆ  ಏಕಪವಿತ್ರ ಶ್ರೀಮನ್ನಾಗಮಂಡಲ ಮಹೋತ್ಸವಕ್ಕೆ ನಡೆಯಲಿದೆ.ಈ ನಡುವೆ ಬುಧವಾರ 10ಕ್ಕೂ ಹೆಚ್ಚು ನಾಗಸಾಧುಗಳು ಧಿಢೀರ್ ಭೇಟಿ ನೀಡಿ ಆಶೀರ್ವಾದ ನೀಡಿದ್ದು ಭಕ್ತರನ್ನು ಪುಳಕಗೊಳಿಸಿತು.

ನಾಗಸಾಧುಗಳು ಗೋಧಾಮಕ್ಕೆ ಆಗಮಿಸಿ ನಾಗಮಂಡಲ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲೆಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಸಂಜೀವಿನಿ ಗೋಧಾಮದ ಸವಿತಾ ಆ‌ರ್. ಆಚಾರ್, ರಕ್ಷತ್ ಆ‌ರ್. ಆಚಾರ್, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಯ ಪ್ರಮುಖರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ವಿಧಿಗಳು ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.ಈ ಸಂಬಂಧ ಭರದ ತಯಾರಿಗಳು ನಡೆಯುತ್ತಿವೆ.