![]() |
| ವಿಜಯೋತ್ಸವ |
ಕಟಪಾಡಿ: ಬಿಹಾರದಲ್ಲಿ ಎನ್ಡಿಎ ನೇತೃತ್ವದ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿದ್ದು ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.ಅದೇ ರೀತಿ ಉಡುಪಿಯ ಕಟಪಾಡಿಯಲ್ಲೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಾಗರಿಕರ ಜೊತೆಗೂಡಿ ಸಂಭ್ರಮಾಚರಣೆ ನಡೆಸಿದರು.
ಗೀತಾಂಜಲಿ ಸುವರ್ಣ ನೇತೃತ್ವದಲ್ಲಿ ಕ್ಷೇತ್ರ ಅಧ್ಯಕ್ಷ ಜಿತೇಂದ್ರ ಶೆಟ್ಟಿ ,ಪಂಚಾಯತ್ ಸದಸ್ಯರಾದ ಸುಭಾಶ್ ಬಲ್ಲಾಳ್ ,ಪವಿತ್ರ ಶೆಟ್ಟಿ ,ಸ್ಥಾನೀಯ ಅಧ್ಯಕ್ಷ ಸಂತೋಷ್ ,ರಂಜಿತ್ ಕೋಟ್ಯಾನ್ ,ರತ್ನಾಕರ್ ,ಗೋಪಾಲಕೃಷ್ಣ ಭಟ್ ,ಅಭಿಲಾಷ್ ಸುವರ್ಣ ,ಮತ್ತು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗಿಯಾದರು.
