ಮಂಗಳೂರು ವಿಶ್ವವಿದ್ಯಾನಿಲಯ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕರ್ನಾಟಕ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ/ಶಿಕ್ಷಕೇತರರ ಸಂಘದ ವತಿಯಿಂದ ಸಂಸ್ಥಾಪಕಿ ಹಾಗೂ ಪ್ರಾಂಶುಪಾಲರಾದ ದಿಲ್ ದಾರ್ ಫಝಲುರ್ ರಹಿಮಾನ್ ರನ್ನು ವಿಶೇಷ ಕುಸುಮಗಳಿಗೆ ಮಾಡಿರುವಂತಹ ಅವರ ವಿಶೇಷ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
![]() |
| ಪಝಲುರ್ ರಹಿಮಾನ್ ಅವರಿಗೆ ಸನ್ಮಾನ |
ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಭಿನ್ನ ಸಾಮರ್ಥ್ಯದ ಮಕ್ಕಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನೂರುಲ್ ಫುರ್ ಖಾನ್ ವಿಶೇಷ ಶಾಲೆಯ ಮಕ್ಕಳು ಪಥ ಸಂಚಲನದಲ್ಲಿ ಹಾಗೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ, 7 ಚಿನ್ನದ ಪದಕ, 2 ಬೆಳ್ಳಿ ಪದಕ ಮತ್ತು 8 ಕಂಚಿನ ಪದಕಗಳನ್ನು ಪಡೆದು ನೂರುಲ್ ಫುರ್ ಖಾನ್ ಶಾಲೆಗೆ ಕೀರ್ತಿ ತಂದಿರುತ್ತಾರೆ.
ಸಮಾರಂಭದಲ್ಲಿ ರೆಡ್ ಕ್ರಾಸ್' ಸಂಸ್ಥೆಯ ಅಧ್ಯಕ್ಷರು, ಬಸ್ರೂರು ರಾಜೀವ್ ರೆಟ್ಟಿ, ಪ್ರಾಂಶುಪಾಲರಾದ ಸೋಜನ್ , ಕ್ರೀಡಾ ನಿರ್ದೇಶಕರಾದ ರಾಮಚಂದ್ರ ಪಾಟ್ಕರ್, ಶಾಸಕರಾದ ಯಶ್ಪಾಲ್ ಸುವರ್ಣ, ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಅಲಿಯಾ ಮತ್ತಿತರರು ಉಪಸ್ಥಿತರಿದ್ದರು.



