![]() |
| ಸಂಜಯ್ , ವಸಂತ್ ಕುಮಾರ್ |
ಕುಂದಾಪುರ: ಮೀನಾಕ್ಷಿ ಮತ್ತವರ ಮಗಳು ಜ್ಯೋತಿ ಎಂಬಿಬ್ಬರು ಕುಂದಾಪುರ ಶಾಸ್ತ್ರಿ ಪಾರ್ಕ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದು ಕರಿಮಣಿ ಸರ ಸುಲಿಗೆ ಮಾಡಿ ಹೋಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ : 125/2025 ಕಲಂ: 309(4) BNS Act ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖಾಧಿಕಾರಿ ಜಯರಾಮ ಡಿ. ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ,ಆರೋಪಿಗಳಾದ ಸಂಜಯ್ ಎಲ್ (33) ಮತ್ತು ವಸಂತ ಕುಮಾರ್ (30) ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಚಿನ್ನದ ಕರಿಮಣಿ ಚೈನ್ , ಅಂದಾಜು ಮೌಲ್ಯ ರೂ. 3.00.000 ಹಾಗೂ ಕಾರು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
