
ಉಡುಪಿ: ಆನ್ಲೈನ್ ಫ್ರಾಡ್ ಹೆಚ್ಚಳ ಹಿನ್ನೆಲೆ: ಬ್ಯಾಂಕರ್ಸ್ ಜೊತೆ ಉಡುಪಿ ಎಸ್ಪಿ ಸಭೆ
21/07/2025 03:27 PM
ಉಡುಪಿ: ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿತಯಲ್ಲಿಂದು ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಗಳ ಸಭೆ ಕರೆಯಲಾಯಿತು. ಈ ಸಭೆಯನ್ನು ಎಸ್ಪಿ ಹರಿರಾಮ್ ಶಂಕರ್ ಅವರು ಕರೆದಿದ್ದರು.ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಚೀಟಿಂಗ್ , ಫ್ರಾಡ್ ಪ್ರಕಾರಣಗಳು ಹೆಚ್ಚುತ್ತಿದ್ದು ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಯಿತು. ಇಂತಹ ಮೋಸ ವಂಚನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬ್ಯಾಂಕರ್ಸ್ ಮತ್ತು ಪೊಲೀಸ್ ಇಲಾಖೆಯು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.