
ಕಾಪು ಹಳೇ ಮಾರಿಗುಡಿಯಲ್ಲಿಂದು ಧರ್ಮಸ್ಥಳ ಅವಹೇಳನ ಖಂಡಿಸಿ ಜನಾಗ್ರಹ ಸಭೆ
03/09/2025 06:20 AM
ಕಾಪು :ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಅವಹೇಳನ ಖಂಡಿಸಿ ಇಂದು ಜನಾಗ್ರಹ ಸಭೆ ನಡೆಯಲಿದೆ. ಕಾಪು ಶ್ರೀ ಹಳೇ ಮಾರಿಗುಡಿ ಸಭಾಭವನದಲ್ಲಿ ಧರ್ಮಾತೀತವಾಗಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಜನಾಗ್ರಹ ಸಭೆ ನಡೆಸಿ ನಂತರ ಸರ್ವಿಸ್ ರಸ್ತೆಯ ಮೂಲಕ ಜಾಥಾ ನಡೆಸಿ ತಹಶಿಲ್ದಾರರ ಕಚೇರಿಗೆ ತೆರಳಿ ಸರ್ಕಾರಕ್ಕೆ ಸ್ವಯಂಪ್ರೇರಿತ ವಾಗಿ ಅಪಪ್ರಚಾರ ಮಾಡುವವರ ಮತ್ತು ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಭಕಾಭಿಮಾನಿಗಳ ವೇದಿಕೆಯ ಪ್ರಮುಖರಾದ ದಯಾನಂದ ಹೆಜಮಾಡಿ ತಿಳಿಸಿದರು.
ಸಭೆಯ ಪ್ರಮುಖ ದಿಕ್ಸೂಚಿ ಭಾಷಣವನ್ನು ವಸಂತ ಗಿಳಿಯಾರು,ದಾಮೋದರ ಶರ್ಮ,ಸಹನಾ ಕುಂದರ್ ನಡೆಸಲಿದ್ದಾರೆ.ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದು,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ.