
ಉಡುಪಿ: ಚಿರತೆಯಿಂದ ರಕ್ಷಿಸಿಕೊಂಡ ಪುಣ್ಯಕೋಟಿ
16/08/2025 12:27 PM
ಉಡುಪಿ: ಬ್ರಹ್ಮಾವರ ಹಾವಂಜೆ ಗ್ರಾಮದ ಕೀಳಿಂಜೆ ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು ,ಯಶೋಧ ಶೆಟ್ಟಿ ಅವರ ದನದ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ.ಈ ವೇಳೆ ಮನೆ ಮಾಲಿಕರಾದ ಯಶೋಧ ಶೆಟ್ಟಿ ಬೊಬ್ಬೆ ಹೊಡೆದಾಗ ಚಿರತೆ ದನದ ಕೊಟ್ಟಿಯಿಂದ ಹೊರಗೆ ಕಾಡಿನತ್ತ ಓಡಿ ಹೋಗಿದೆ. ಚಿರತೆ ದಾಳಿಯಿಂದ ಕರುವಿನ ಮೇಲೆ ಪರಚಿದ ಗಾಯಗಳಾಗಿದ್ದು ಕರು ಅಪಾಯದಿಂದ ಪಾರಾಗಿದೆ. ಯಶೋಧ ಶೆಟ್ಟಿಯವರ ಮನೆಯ ಎರಡುಕೋಳಿ ಹಾಗೂ ಪಕ್ಕದ ಜಯಶೆಟ್ಟಿ ಬನ್ನಂಜೆಯವರ ಮನೆಯ ಮೂರು ಅಂಕದ ಕೋಳಿಗಳು ಆಹಾರವಾಗಿ ಚಿರತೆಯ ಪಾಲಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಬ್ರಹ್ಮಾವರ ಅರಣ್ಯ ಪಾಲಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ.