ಮಣಿಪಾಲ; ಡಾ.ಶೇಖ್ ವಾಹಿದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಸನ್ಮಾನ ಕಾರ್ಯಕ್ರಮ

ಮಣಿಪಾಲ: ಡಾ.ಶೇಖ್ ವಾಹಿದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಮಣಿಪಾಲ ಜೈನಬ್ ವೆಲ್ಕಾಂ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷೆಯನ್ನು ಟ್ರಸ್ಟ್ ಅಧ್ಯಕ್ಷರಾದ ಡಾ. ಶೇಖ್ ಅಬ್ದುಲ್ ವಾಹೀದ್ ವಹಿಸಿದ್ದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಎಂ. ಎ. ಗಫೂರ್, ಸಮಾಜ ಸೇವಕ ನಿತ್ಯನಂದ ಒಳಕಾಡು, ರಕ್ತದಾನಿ ಅಜ್ಮಲ್ ಅಸದೀ, ಸಮಾಜ ಸೇವಕ ಶಾಂತಾರಾಮ್ ಶೆಟ್ಟಿ ಹಾಗೂ ಮೌಲಾನಾ ಹಫೀಝ್ ಖಾಸಿಂ ರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಶೇಖ್ ಶರ್ಪುದ್ದೀನ್  , ಮೌಲಾನಾ ಅಬ್ದುಲ್ ಖಾಸಿಂ ಕಾರ್ಕಳ, ಡಾ! ಫೈಸಲ್, ಸಂಪತ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ  ಡಾ.ಶೇಖ್ ವಾಹಿದ್ ದಾವೂದ್ ಅಭಿಮಾನಿ ಬಳಗದ ವತಿಯಿಂದ ಡಾ.ಶೇಖ್ ಅಬ್ದುಲ್ ವಾಹಿದ್ ರನ್ನು ಸನ್ಮಾನಿಸಲಾಯಿತು.