
ಪರ್ಕಳ ಕಾಂಗ್ರೆಸ್ ಕಛೇರಿಗೆ ಲಕ್ಷ್ಮೀ, ಹೆಬ್ಬಾಳ್ಕರ್ ಭೇಟಿ
15/08/2025 09:49 AM
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಇಂದು ಪರ್ಕಳ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಮತ್ತು ಯೋಜನೆ ಯಶಸ್ವಿಯಾಗಲು ಪರ್ಕಳ ಕಾಂಗ್ರೆಸ್ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದು ಕಾರ್ಯಕರ್ತರನ್ನ ಹುರಿದಿಂಬಿಸಿದ ಅವರು, 79ನೇ ಸ್ವಾತಂತ್ರೋತ್ಸವದ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ,ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮೋಹನ್ ದಾಸ್ ನಾಯಕ್ ,ಗಣೇಶ್ ರಾಜ್ ಸರಳಬೆಟ್ಟು, ಜಯ ಶೆಟ್ಟಿ ಬನ್ನಂಜೆ ,ಆದರ್ಶ ಶೆಟ್ಟಿಗಾರ್ ,ದೇವೇಂದ್ರ ನಾಯ್ಕ್ ,ದೇವಿಪ್ರಸಾದ್ ಆಚಾರ್ಯ ,ಜಯರಾಮ್ ಪೂಜಾರಿ ,ಗಣೇಶ್ ನಾಯಕ್ ,ಚೇತನ್ ಕುಡ್ವ ,ಅಭಿಷೇಕ್ ನಾಯ್ಕ್ ,ಜಸ್ವಂತ ಜೋಗಿ ,ಸುರೇಶ ದೇವಾಡಿ,ರಾಜೇಶ್ ಪ್ರಭು ,ಸಪ್ನಾ ನಾಯಕ್, ವಿಜಯಲಕ್ಷ್ಮಿ, ಸುರೇಂದ್ರ ಪ್ರಭು, ಅನಂತ ಕೃಷ್ಣ, ಅರುಣ್ ಕುಮಾರ ಹಿರಿಯಡ್ಕ, ಸುರೇಶ್ ನಾಯಕ್, ಮೂಡುಬೆಳ್ಳೆ ಜೊತೆಗೆ ಇದ್ದರು.