
ಹೆಜಮಾಡಿ: ಹೃದಯ ಸಂಬಂಧಿ ಕಾಯಿಲೆಗೆ ಕಂದಮ್ಮ ಬಲಿ
24/07/2025 09:47 AM
ಪಡುಬಿದ್ರಿ: ಹೃದಯ ಸಂಬಂಧಿ ಕಾಯಿಲೆ ಮತ್ತು ಹೃದಯಾಘಾತದಂತಹ ಪ್ರಕರಣಗಳು ಹೆಚ್ಚುತ್ತಿದ್ದು ಹೆಜಮಾಡಿಯ ಎನ್.ಎಸ್. ರೋಡ್ ಬೇಂಗಲೆಯ ಕಲಂದರ್ ಹಾಗು ಮುಲ್ತಾಜ್ ದಂಪತಿಯ ಪುತ್ರಿ ಆರು ವರ್ಷದ ಫಾತಿಮಾ ಮಾಹಿರಾ ಇದೇ ಕಾಯಿಲೆಗೆ ಬಲಿಯಾಗಿದ್ದಾಳೆ.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈಕೆ ಹೆಜಮಾಡಿಯ ವಿದ್ಯಾ ಪ್ರಸಾರ ಶಾಲೆಯಲ್ಲಿ ಎಲ್ ಕೆಜಿ ವಿದ್ಯಾರ್ಥಿನಿಯಾಗಿದ್ದಳು.