ಧರ್ಮಸ್ಥಳ SIT ತನಿಖೆ -  ತನಿಖಾ ವರದಿ ಬರುವ ತನಕ ವೀರೇಂದ್ರ ಹೆಗ್ಗಡೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು - ಅಮೃತ್ ಶೆಣೈ

ಧರ್ಮಸ್ಥಳ SIT ತನಿಖೆ - ತನಿಖಾ ವರದಿ ಬರುವ ತನಕ ವೀರೇಂದ್ರ ಹೆಗ್ಗಡೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು - ಅಮೃತ್ ಶೆಣೈ

 

ಉಡುಪಿ: ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಶವಗಳನ್ನು ಹೂತು ಹಾಕಲಾಗಿದೆ ಎಂಬ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯ ಸರಕಾರ S I T ತನಿಖೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತನಿಖಾ ವರದಿ ಬರುವ ತನಕ ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ,ಹೋರಾಟಗಾರ ಅಮೃತ್ ಶೆಣೈ ಒತ್ತಾಯ ಮಾಡಿದ್ದಾರೆ.

ಧರ್ಮಸ್ಥಳ ಕೆಲಕಾಲದಿಂದ ಸೌಜನ್ಯಾ ಅತ್ಯಾಚಾರ ವಿಚಾರವಾಗಿ ಚರ್ಚೆಯಲ್ಲಿತ್ತು. ಈಗ ದೇಶದಾದ್ಯಂತ ಈ ಆರೋಪಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳ ಮುಖಾಂತರ ಚರ್ಚೆ ಆಗುವಾಗ ಹೆಗ್ಗಡೆಯವರು ಅಧಿಕಾರ ತ್ಯಜಿಸಿ ,ತಾನು ತನ್ನ ಅಧಿಕಾರದ ಪ್ರಭಾವವನ್ನು ತನಿಖೆ ಮೇಲೆ ಬಳಸಲಿಲ್ಲ ಎಂಬುದನ್ನು ಮಾದರಿ ವ್ಯಕ್ತಿತ್ವವಾಗಿ ತೋರಿಸಿಕೊಡಬೇಕು ಎಂದು ಅಮೃತ್ ಶೆಣೈ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article