
ಉಡುಪಿ: ಜುಲೈ 24 ರಂದು ಕೇರಳ ಸಮಾಜಂ ಉಡುಪಿ ವತಿಯಿಂದ ಮಲ್ಪೆ ಕಡಲ ತೀರದಲ್ಲಿ 'ಕರ್ಕಿಡಕ ವಾವು ಬಲಿ' ಅಯೋಜನೆ
ಉಡುಪಿ: ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ 'ಕರ್ಕಿಡಕ ವಾವು ಬಲಿ'(ಬಲಿ ತರ್ಪಣಂ) ಯನ್ನು ಮೊದಲ ಬಾರಿಗೆ ಕೇರಳ ಸಮಾಜಂ ಉಡುಪಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಜುಲೈ 24 ರಂದು ಅಯೋಜನೆ ಮಾಡಿದೆ.
ಮಾಲಯಾಳಂ ಕ್ಯಾಲೆಂಡರ್ ಪ್ರಕಾರ ಜುಲೈ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಬರೋ ತಿಂಗಳನ್ನು ಕರ್ಕಿಡಕ ಮಾಸ ಎಂದು ಕರೆಯುತ್ತಾರೆ.ಈ ಸಂದರ್ಭದಲ್ಲಿ ಮೃತ ಪೂರ್ವಜರ ಅತ್ಮ ಶಾಂತಿ ,ಸದ್ಗತಿಗಾಗಿ ಬಲಿ ತರ್ಪಣಂ ಮಾಡುವುದು ಕೇರಳದಲ್ಲಿ ಸಂಪ್ರದಾಯ.
ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ ಆಲುವಾ ಶಿವ ದೇವಾಲಯದ ಬಳಿಯ ಪೆರಿಯಾರನಂತಹ ನದಿ ದಂಡೆಗಳು ಮತ್ತು ವರ್ಕಳ ಪಾಪನಾಶಮ್ನಂತಹ ಕಡಲತೀರಗಳಲ್ಲಿ ಕರ್ಕಿಡಕ ವಾವು ಬಲಿಯನ್ನು ಬೃಹತ್ ಸಂಖ್ಯೆಯಲ್ಲಿ ಜನರು ಅಚರಿಸುತ್ತಾರೆ.
ಉದ್ಯೋಗಕ್ಕಾಗಿ ಹಾಗೂ ಇನ್ನಿತರ ಕಾರ್ಯಕ್ಕಾಗಿ ಕೇರಳ ಬಿಟ್ಟು ಉಡುಪಿಯಲ್ಲಿ ನೆಲೆಯೂರಿರುವ ಕೇರಳ ಸಮಾಜದವರಿಗೆ ಇಲ್ಲಿಯೇ ಈ ಪುಣ್ಯ ಕಾರ್ಯ ವನ್ನು ಮಾಡಲು ಉಡುಪಿ ಕೇರಳ ಸಮಾಜಂ ಸಂಘಟನೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಜುಲೈ 24 ರ ಅಮಾವಾಸ್ಯೆ ದಿನ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯುವ ಕರ್ಕಿಡಕ ವಾವು ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸುವಂತೆ ಸಂಘಟಕರು ವಿನಂತಿ ಕೇಳಿಕೊಂಡಿದ್ದಾರೆ. ಕಾರ್ಯಕ್ರಮವು ಅಂದು ಮುಂಜಾನೆ 5.30 ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅರಂಭಗೊಳ್ಳಲಿದೆ. ಶಾಸ್ತ್ರೋಸ್ತ್ರವಾಗಿ ವಿಧಿವಿಧಾನಗಳು ಮತ್ತು ಅದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಸಂಘಟಕರೇ ವ್ಯವಸ್ಥೆ ಮಾಡಿಕೊಡಲಿದ್ದಾರೆ.ಬಲಿ ತರ್ಪಣಂ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಮತ್ತು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಬಹುದು.
*9845 246448, 8904 383 739*